Monday, January 20, 2014

ಉಡುಪಿಯಲ್ಲೊಬ್ಬಳು ಮಲಾಲಾ!

ಉಡುಪಿಯಲ್ಲೊಬ್ಬಳು ಮಲಾಲಾ!

ಮೊನ್ನೆ ಮೊಹಮ್ಮದ್ ಯಾಸಿರ್ ಎಂಬ ನೀಚ ತನ್ನ ಗೆಳತಿಯ ಜೊತೆ ಕಳೆದ ಖಾಸಗಿ ಕ್ಷಣಗಳ ಚಿತ್ರಗಳನ್ನು Facebookಗೆ upload ಮಾಡಿದ ಘಟನೆಯ ಬಗ್ಗೆ ನಿಮಗೆಲ್ಲ ತಿಳಿದೇ ಇದೆ. ಇದೇ ಘಟನೆಯನ್ನು ಆಧರಿಸಿ RSS ಗ್ಯಾಂಗ್ ಈ ಪ್ರಕರಣದಲ್ಲಿ ಇಲ್ಲಿನ ಮುಸ್ಲಿಮ್ ಸಮುದಾಯವೇ ಆರೋಪಿ ಎಂಬಂತೆ ಬೊಬ್ಬೆ ಹೊಡೆಯಿತು. ಲವ್ ಜಿಹಾದ್ ಎಂದೆಲ್ಲ ಏನೇನೊ ಒದರತೊಡಗಿತು. ABVP ಸಂಘಟನೆ ಕೂಡ ಈ ಕೃತ್ಯವನ್ನು ತನ್ನ ರಾಜಕೀಯಕ್ಕೆ ಬಳಸಿಕೊಂಡಿತು. ಇದಕ್ಕೆ ಕರಾವಳಿಯ ಚೆಡ್ಡಿ ಗ್ಯಾಂಗ್‌ನ ನಾಯಕರೆಲ್ಲ ಸಾಥ್ ನೀಡಿದರು. ಯಾಸಿರ್‌ನ Facebook ಕುಕೃತ್ಯದ ವಿರುದ್ಧ ಉಡುಪಿಯಲ್ಲಿ ವಿದ್ಯಾರ್ಥಿಗಳ ಬೃಹತ್ ಪ್ರತಿಭಟನಾ ಸಭೆಯನ್ನು ಆಯೋಜಿಸಿತ್ತು. ಈ ಸಭೆಯಲ್ಲಿ ಯಾಸಿರ್ ವಿರುದ್ಧ ಪ್ರತಿಭಟಿಸಲು ಎಲ್ಲ ಜಾತಿ-ಮತಗಳ ಹುಡುಗ-ಹುಡುಗಿಯರು ಸೇರಿದ್ದರು. ಆದರೆ ಸಭೆಯಲ್ಲಿ RSS ಗ್ಯಾಂಗ್ ನಾಯಕರೆಲ್ಲ ಇಡೀ ಮುಸ್ಲಿಮ್ ಸಮುದಾಯವನ್ನು ತೀರಾ ಕೆಟ್ಟದಾಗಿ ಅವಹೇಳನ ಮಾಡುತ್ತಾ ಭಾಷಣ ಮಾಡುತ್ತಿದ್ದರಂತೆ. ಮುಸ್ಲಿಮರನ್ನು, ಇಸ್ಲಾಂ ಅನ್ನು ಏನೇನೋ ಹೇಳುತ್ತಾ ತೆಗಳುತ್ತಿದ್ದರಂತೆ. ಇಷ್ಟನ್ನೆಲ್ಲ ಅಲ್ಲಿ ಸೇರಿದ್ದ ವಿದ್ಯಾರ್ಥಿ ಸಮುದಾಯ ಕೇಳಿಸಿಕೊಂಡು ತೆಪ್ಪಗಿತ್ತು. ಆದರೆ ಗುಂಪಿನ ನಡುವೆ ನಿಂತಿದ್ದ ಓರ್ವ ಬುರ್ಖಾಧಾರಿ ವಿದ್ಯಾರ್ಥಿನಿ ನೇರವಾಗಿ ವೇದಿಕೆಗೆ ಬಂದು ನನಗೂ ಮಾತನಾಡಲಿಕ್ಕಿದೆ ಎಂದು ಹೇಳಿ ಮೈಕ್ ಎದುರು ಬಂದು ನಿಂತುಕೊಂಡು ಮಾತನಾಡಲು ಶುರುಮಾಡಿದಳಂತೆ. "ಯಾಸಿರ್ ಮಾಡಿದ್ದು ಘೋರ ಅಪರಾಧ. ಅದನ್ನು ನಾವೂ ಸಹ ಖಂಡಿಸುತ್ತೇವೆ. ಮುಸ್ಲಿಮ್ ವಿದ್ಯಾರ್ಥಿಗಳು ಯಾಸಿರ್‌ನನ್ನು ಬೆಂಬಲಿಸುತ್ತಿಲ್ಲ. ಆದರೆ ಅವನು ಮಾಡಿದ ಅಪರಾಧಕ್ಕೆ ಇಡೀ ಮುಸ್ಲಿಂ ಸಮುದಾಯವನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಬೇಡಿ. ಹೀಗೆ ನೀವು ಮುಸಲ್ಮಾನರ ಬಗ್ಗೆ ಅವಹೇಳನ ಮಾಡುವುದನ್ನು ಮುಂದುವರಿಸಿದರೆ ನಾವು ಇಲ್ಲಿರುವುದು ಸಾಧ್ಯವಿಲ್ಲ" ಎಂದು ಜೋರಾಗಿಯೇ ಹೇಳಿಬಿಟ್ಟಳಂತೆ. ನೆರೆದ ವಿದ್ಯಾರ್ಥಿಗಳೆಲ್ಲ ಚಪ್ಪಾಳೆ ತಟ್ಟಿ ಆಕೆಯನ್ನು ಬೆಂಬಲಿಸಿದರಂತೆ. ಇಂತಹ ದಿಟ್ಟ ಹುಡುಗಿಯ ಮಾತುಗಳನ್ನು ಪ್ರಜಾವಾಣಿ ಮಾತ್ರ ವರದಿ ಮಾಡಿತ್ತು. ಬೇರೆ ಪತ್ರಿಕೆಗಳಿಗೆ ಅದನ್ನು ಸುದ್ದಿ ಮಾಡುವ ಸೌಜನ್ಯವೂ ಇಲ್ಲ. RSS ಗ್ಯಾಂಗ್‌ನ ಕೊಳಕು ಮಾತುಗಳ ನಡುವೆ ವೇದಿಕೆ ಏರಿ ಧೈರ್ಯದಿಂದ ಅವರೆದುರಿಗೆ ತನ್ನ ಮಾತುಗಳನ್ನು ಹೇಳಿದ ಈ ಹುಡುಗಿ ಬಗ್ಗೆ ನನಗೆ ತುಂಬಾ ಹೆಮ್ಮೆ ಅನಿಸಿತು. ಈಕೆ ನಮ್ಮ ಉಡುಪಿಯ ಮಲಾಲಾ. ಹೆಸರು ಸಫಾ. ಸಫಾಗೆ ನನ್ನದೊಂದು ಸೆಲ್ಯೂಟ್.
(ಇಲ್ಲಿರುವುದು ಮಲಾಲಾ ಚಿತ್ರ)



http://www.facebook.com/l.php?u=http%3A%2F%2Fwww.prajavani.net%2Farticle%2F%25E0%25B2%2589%25E0%25B2%25A1%25E0%25B3%2581%25E0%25B2%25AA%25E0%25B2%25BF-%25E0%25B2%25B5%25E0%25B2%25BF%25E0%25B2%25A6%25E0%25B3%258D%25E0%25B2%25AF%25E0%25B2%25BE%25E0%25B2%25B0%25E0%25B3%258D%25E0%25B2%25A5%25E0%25B2%25BF%25E0%25B2%2597%25E0%25B2%25B3-%25E0%25B2%25AA%25E0%25B3%258D%25E0%25B2%25B0%25E0%25B2%25A4%25E0%25B2%25BF%25E0%25B2%25AD%25E0%25B2%259F%25E0%25B2%25A8%25E0%25B3%2586&h=VAQG-gFgg

Sunday, January 12, 2014

ಯಾರನ್ನು ಸಿಂಹಾಸನದ ಮೇಲೆ ಕೂರಿಸೆಂದು ಹೇಳುತ್ತಿರುವೆ

ಯಾರನ್ನು ಸಿಂಹಾಸನದ ಮೇಲೆ ಕೂರಿಸೆಂದು ಹೇಳುತ್ತಿರುವೆ
ಖಡ್ಗದ ಮೇಲೆ ವಿಷ ಲೇಪಿಸುವ ಮಾತನಾಡುತ್ತಿರುವೆ

ಅವನ ತಲೆಯ ಮೇಲೆ ಕೊಲೆಯ ಆರೋಪಗಳಿವೆ ಓಹ್ ತಾಯಿಯೆ
ಅವನದೇ ತಲೆಯ ಮೇಲೆ ಕಿರೀಟವಿಡುವ ಮಾತನಾಡುತ್ತಿರುವೆ

ಸಂಗಾತಿಗಳ ಸಮಾಧಿಗಳ ಮೇಲೆ ಈ ಕಟ್ಟಡಗಳು ನಿಂತಿವೆ
ಇತಿಹಾಸವನ್ನು ಹೀಗೆ ಬದಲಿಸುವ ಮಾತನಾಡುತ್ತಿರುವೆ

ಒಂದು ಬೆಳಕಿನ ಕಿರಣಕ್ಕಾಗಿ ಇಲ್ಲಿ ಜೀವಗಳು ಉರಿಯುತ್ತಿವೆ
ಈ ಸತ್ಯವನ್ನು ನೀನು ಮುಚ್ಚಿಡುವ ಮಾತನಾಡುತ್ತಿರುವೆ

ಈಗಲೂ ಕಿವಿಗಳಲ್ಲಿ ಮಾರ್ದನಿಸುತ್ತಿವೆ ಆ ಚೀತ್ಕಾರಗಳು
ಅವುಗಳನ್ನು ಮರೆತು ನಗುವ ಮಾತನಾಡುತ್ತಿರುವೆ

ನೀ ನಡೆವ ಬೀದಿಯಲ್ಲಿ ಹೀಗೆ ರಾಶಿ ಹೆಣಗಳು ಬಿದ್ದಿವೆ
ಅಸ್ಥಿಗಳ ಮೇಲೆ ಹೆದ್ದಾರಿ ನಿರ್ಮಿಸುವ ಮಾತನಾಡುತ್ತಿರುವೆ

ನಿನ್ನ ಇಚ್ಛೆಗೆ ವಿರುದ್ಧವಾಗಿ ಜಗತ್ತು ಬದಲಾಗುತ್ತಿದೆ 'ಸಾಹಿಲ್'
ಮತ್ತೆ ನೀನು ದಿನವೂ ಜಗತ್ತನ್ನೆ ಬದಲಿಸುವ ಮಾತನಾಡುತ್ತಿರುವೆ

ಮೂಲ: ಸಂವರ್ತ ಸಾಹಿಲ್.
ಕನ್ನಡಕ್ಕೆ- ಶಶಿಧರ ಹೆಮ್ಮಾಡಿ.

ಇವನೀಗ ಅಲ್ಲಿದ್ದಾನೆ

ಇವನೀಗ ಅಲ್ಲಿದ್ದಾನೆ
.
ಮೊನ್ನೆಯಷ್ಟೇ
ಬಜರಂಗದಳದ ಮೆರವಣಿಗೆಯಲ್ಲಿ
ಇವನು ಗಂಟಲು ಬಿರಿಯುವ ಹಾಗೆ
ಘೋಷಣೆಗಳನ್ನು ಕೂಗುತ್ತಿದ್ದ.
ನಾನು ಕೊಟ್ಟ ಸೌಹಾರ್ದ ದೀಪಾವಳಿಯ
ಆಹ್ವಾನ ಪತ್ರಿಕೆ ಹರಿದು ಹಾಕಿ
ಸಾಬರೊಂದಿಗೆ, ಕ್ರೈಸ್ತರೊಂದಿಗೆ
ದೀಪಾವಳಿಯೇ..
ಸಲ್ಲದು ಸಲ್ಲದು
ಎಂದು ಹಲ್ಲು ಮಸೆದಿದ್ದ.

ಜಗತ್ತಿನಾದ್ಯಂತದ ಸಾಬರನ್ನು,
ಊರಿನ ಪಾದ್ರಿಗಳನ್ನು
ಪದೇಪದೇ ಗೇಲಿ ಮಾಡಿದ್ದ.
ಪಕ್ಕದ ಮನೆಯ ಸಾಬರ ಹುಡುಗ
ಅವರ ಪಕ್ಕದ ಮನೆಯ ಸುಂದರಿಗೆ
ಲೈನ್ ಹೊಡೆದಿದ್ದಕ್ಕೆ ಇವನು
ಆತನಿಗೆ ಹೊಡೆದಿದ್ದ.
ಇವನ ಜಾತಿಯ ರಾಧಿಕಾ
ಅವರ ಜಾತಿಯ
ಸಾದಿಕನನ್ನುಪ್ರೀತಿಸಿದಾಗ
ಮದುವೆಯಾಗದಂತೆ ತಡೆದಿದ್ದ
ಹೀಗೆಲ್ಲ ತುಂಬಾ ಹೆಸರು ಪಡೆದಿದ್ದ.

ಭಾರತದಲ್ಲಿ ಬರಕ್ಕೆ  ಬಡತನಕ್ಕೆ
ಬಾಬರನೇ ಕಾರಣ
ಎಂದು ನಂಬಿದ್ದ.
ಕಾಪು ಮಸೀದಿಗೆ
ಕಲ್ಲು ಹೊಡೆದವರ ಪಟ್ಟಿಯಲ್ಲಿ
ಇವನಿದ್ದರೂ ಪೊಲೀಸರಿಂದ
ತಪ್ಪಿಸಿಕೊಂಡಿದ್ದ.
ಇಗರ್ಜಿಗೆ ಹೋಗುವ
ಮೇರಿಗೆ ಮೊಂಬತ್ತಿ ಬೆಳಗುವ
ಹಿಂದೂಗಳನ್ನು ಕಂಡರೆ
ಸಿಟ್ಟಾಗುತ್ತಿದ್ದ.
ಕ್ರೈಸ್ತರ ಗೆಳೆತನ ಮಾಡಿದರೆ
ಮತಾಂತರವಾಗುತ್ತೀರಿ
ಎಂದು ಹೆದರಿಸಿದ್ದ.

ಕಲ್ಲಡ್ಕ ಪ್ರಭಾಕರ ಭಟ್ಟರು
ಅಂಕದಕಟ್ಟೆ ರಾಮಣ್ಣ ಶೆಟ್ಟರು
ತನಗೆ ಆದರ್ಶ ಎಂದು ನಂಬಿದ್ದ.
ಧರ್ಮ ರಕ್ಷಣೆಯ ಪಾಠವನ್ನು
ಗೆಳೆಯರಿಗೆ ಬೋಧಿಸಿದ್ದ.
ಸಂಗಾತಿಗಳ ಪಡೆಯನ್ನೇ ಕಟ್ಟಿದ್ದ
ತೊಡೆಯನ್ನೂ ತಟ್ಟಿದ್ದ
ಗರ್ವದಿಂದ ಘರ್ಜಿಸು ಎಂದು
ಹೂಂಕರಿಸಿದ್ದ.

ಮೊನ್ನೆ ಅಚಾನಕ್ ಆಗಿ
ಇವನ ಅಪ್ಪನ ಬಾಲ್ಯದ ಗೆಳೆಯ
ಇಮ್ಯಾನುಯೆಲ್ ಸಿಕ್ವೇರಾ
ಇವನಿಗೆ ವೀಸಾ ಕಳಿಸಿಕೊಟ್ಟರು.
ಸೌದಿ ಅರೇಬಿಯಾದಲ್ಲಿ ಕೆಲಸ
ಆರವತ್ತು ಸಾವಿರ ಸಂಬಳ
ಎರಡು ವರ್ಷಕ್ಕೆ ಮೂರು ತಿಂಗಳು ರಜೆ.
ಹೋಗೋದು ಬರೋದು ಎಲ್ಲ ಖರ್ಚು
ಅವರದ್ದೆ. ಅದೂ ವಿಮಾನದಲ್ಲಿ!

ಈಗ ಇವನಿಗೆ ಸೌದಿ ಅರೇಬಿಯಾದ
ಸಾಬರ ಕಂಪೆನಿಯಲ್ಲಿ ಉದ್ಯೋಗ.
ಶುಕ್ರವಾರ ರಜೆ, ರಮ್ಜಾನ್‌ನಲ್ಲಿ ಉಪವಾಸ.
ಸೊರಬದ ಇಬ್ಬರು ಸಾಬರು
ಕಂಕನಾಡಿಯ ಇಬ್ಬರು ಕ್ರೈಸ್ತರ ಜೊತೆಗೆ
ಈಗ ಇವನ ವಾಸ.
ಮನೆಗೆ ಇಪ್ಪತ್ತು ಸಾವಿರ ಕಳಿಸುತ್ತಾನೆ
ಉಳಿದದ್ದನ್ನು ಉಳಿಸುತ್ತಾನೆ.
ಉರಿನಲ್ಲೀಗ ಇವನ ಅಪ್ಪ
ಹೊಸ ಮನೆಗೆ ಪಂಚಾಂಗ ಹಾಕಿದ್ದಾರೆ
ತಮ್ಮ ಕನಸಿನ ಡಾಬರ್ಮನ್
ನಾಯಿಯನ್ನೂ ಸಾಕಿದ್ದಾರೆ.

ಇತ್ತ ಊರಲ್ಲಿ ಇವನನ್ನು ನಂಬಿದ್ದ
ಕಲ್ಲು ಹೊಡೆದಿದ್ದ, ಶಿಲುಬೆ ಮುರಿದಿದ್ದ
ಪೊಲೀಸರಿಂದ ಒದೆ ತಿಂದಿದ್ದ ಗೆಳೆಯರು
ಇವನ ಹೆಸರು ಎತ್ತಿದರೆ
ಮೋಸ ಮೋಸ
ಎಂದು ಊರೆಲ್ಲ ಹೇಳಿಕೊಂಡು
ಇವನಿಗೆ ಹಿಡಿಶಾಪ ಹಾಕುತ್ತಾ
ಉರಿಯುತ್ತಾ ಅಲೆಯುತ್ತಿದ್ದಾರೆ.
-ಶಶಿಧರ ಹೆಮ್ಮಾಡಿ

ಪಶುಪತಿ ಬೆತ್ತಲಾದ ಕಥೆ!



ಪಶುಪತಿ ಬೆತ್ತಲಾದ ಕಥೆ!

ಈ ಕವನದಲ್ಲಿ ಬರುವ ಎಲ್ಲ ಪಾತ್ರಗಳೂ ಕಾಲ್ಪನಿಕ

ವಂದೇ ಮಾತರಂ, ಹರಿ ಓಂ
ಇದು ನಾನು ಬೆತ್ತಲಾದ ಕಥನ!
ನಾನು ಪಶುಪತಿ ಬಿಟ್ಟ
(ಹೆಸರು ಬದಲಾಯಿಸಿಕೊಂಡಿದ್ದೇನೆ)
ಉಡುಪಿಯವನು, ಉಡುಪಿಲ್ಲದಿದ್ದರೆ
ನಿಮ್ಮ ಹಾಗೆಯೆ ಬೆತ್ತಲಾಗುವವನು.

ನಾನು ಚಿಕ್ಕವನಿದ್ದಾಗ
ನಿಜಕ್ಕೂ ಮಗುವಿನ ಹಾಗೆಯೇ ಇದ್ದೆ.
ಶಾಲೆಯಲ್ಲಿ ತುಂಬಾ ನಗುತ್ತಿದ್ದೆ
ರಫೀಕ್, ಸುಬ್ಬ,ಅಂತೋನಿಯೊಂದಿಗೆ
ಒಂದೇ ಬೆಂಚಿನಲ್ಲಿ ಕೂತು
ಪಾಠ ಕೇಳುತ್ತಿದ್ದೆ. ಅಲ್ಲಿಯ ತನಕ
ನಾನು ನನ್ನ ಹೆಸರಿಗೆ ತಕ್ಕಂತೆ
‘ಪಶು’ ಆಗಿಯೇ ಇದ್ದೆ.
ಗೋಮುಖ ವ್ಯಾಘ್ರನಾಗಿದ್ದು
ಆ ಮೇಲೆಯೆ!

ಕಾಲೇಜು ಸೇರಿದಾಗ
ಹುಡುಗಿಯರ ಬಗ್ಗೆ ಮತ್ತು ಅವರ
ಲಂಗ ದಾವಣಿ ಕುಪ್ಪಸದ ಬಗ್ಗೆ
ಪುಪ್ಪುಸದಲ್ಲಿ ಉಸಿರು ಬಿಗಿಯಾಗುವಷ್ಟು
ಕುತೂಹಲವಿತ್ತು ನನಗೆ.
ಇದೆಲ್ಲ ವಯೋಸಹಜ ಎಂದು
ಆಗ ಭಾವಿಸಿದ್ದ ನನಗೆ
ಅದೊಂದು ಕಾಯಿಲೆಯಾಗಿ ಉಳಿದುಬಿಟ್ಟಿತಲ್ಲ
ಎಂದು ನಂತರ ಅನಿಸತೊಡಗಿತ್ತು.

ಕಾಲೇಜಿನ ಕಾರಿಡಾರ್‌ನಲ್ಲಿ
ಹುಡುಗಿಯರ ಹಿಂದೆ ಸುತ್ತುತ್ತಿದ್ದಾಗ
ಗೆಳೆಯನೊಬ್ಬ ಹೇಳಿದ
NSS ಸೇರು ಮಜಾ ಇರುತ್ತೆ ಅಂತ.
ನನ್ನ ಕಿವಿಗೆ ಅದು ತಪ್ಪಾಗಿ ಕೇಳಿ
ನಾನು RSS ಸೇರಿದೆ.
ನನಗಾಗ ಉಕ್ಕುತ್ತಿದ್ದ ಯೌವ್ವನ
ಸಂಘದಲ್ಲಿ ನನಗೆ ಸಂಗವಾಯ್ತು
ಸ್ವಯಂ ಸೇವಕ ಸಂಘವಾದ ಕಾರಣ
ಎಲ್ಲವೂ ಉಚಿತವಾಗಿಯೇ ಇತ್ತು ಬಿಡಿ.

ಮುಸಲ್ಮಾನರು ಗಂಡಾಂತರ
ಕ್ರೈಸ್ತರು ಮತಾಂತರ ಎಂದೆಲ್ಲ
ನನಗೆ ಅಲ್ಲಿ ಮನವರಿಕೆ ಮಾಡಿದರು.
ಭಾರತೀಯ ಸಂಸ್ಕೃತಿ,
ಮನುಸ್ಮೃತಿ ಮತ್ತನೇಕ ವಿಕೃತಿ
ಕಾಮ ಮೀಮಾಂಸೆ, ಗೋಮಾಂಸೆ
ಎಲ್ಲವನ್ನೂ ನಾನು ಅಲ್ಲಿಯೆ ಕಲಿತೆ.

ಮಂಗಳೂರಿನ ಮಾಧವಿ
ಕಾಟಿಪಳ್ಳದ ಕಾಸಿಮ್ ಜೊತೆ
ಪಾಂಗಾಳದ ಪಾಂಡುರಂಗ ಭವನದಲ್ಲಿ
ಐಸ್‌ಕ್ರೀಮ್ ಮೆಲ್ಲುತ್ತಿದ್ದಾಗ
ಅವರಿಬ್ಬರನ್ನು ಪೊಲೀಸರಿಗೊಪ್ಪಿಸಿ
‘ಲವ್ ಜಿಹಾದ್’ ತಡೆದು
ನಮ್ಮ ಧರ್ಮ ರಕ್ಷಿಸಿದ
ಕೀರ್ತಿ ನನಗೇ ಸಲ್ಲಬೇಕು.

ಪ್ರೇಮಿಗಳ ದಿನ ಬಸ್ಸಿಗೆ ಕಾಯುತ್ತಿದ್ದ
ಜೋಡಿಯ ಮೇಲೆ ದಾಳಿ ಮಾಡಿದಾಗ
ನಾವು ಅಣ್ಣತಂಗಿ ಎಂದು
ಅವರೆಷ್ಟೇ ಹೇಳಿದರೂ
ಅವರ ತಂದೆ ತಾಯಿಯೇ
ಸ್ವತಃ ಪೊಲೀಸ್ ಠಾಣೆಗೆ ಬಂದು
ವಾದ ಮಾಡಿದರೂ
ಹೈದರಾಬಾದ್ ಫೊರೆನ್ಸಿಕ್ ಲ್ಯಾಬ್‌ನಿಂದ
ಡಿಎನ್‌ಎ ರಿಪೋರ್ಟ್ ಬರುವ ತನಕ
ನಾವು ಅವರನ್ನು ಬಿಟ್ಟಿರಲಿಲ್ಲ ಗೊತ್ತಾ?

ನನಗೂ ಮದುವೆಯಾಯ್ತ
ಹೆಂಡತಿಯಂತೂ ಪದ್ಮನಯನಿ.
ಹೀಗೆಲ್ಲಾ ಇರುತ್ತಾ ನನ್ನನ್ನು
ರಾಜಕಾರಣ ಸೆರಗು ಬೀಸಿ ಕರೆಯಿತು
ನಾನು ಪ್ರತಿನಿಧಿಯಾಗಿ ಆಯ್ಕೆಯಾದೆ.
ಜನಸಂಪರ್ಕ ಜಾಸ್ತಿಯಾಯಿತು
ಹೆಂಡತಿ ಮಕ್ಕಳು ಬೋರಾಯಿತು
ಸಖಿಯರ ಸಹವಾಸವೂ ಜೋರಾಯಿತು

ಹೆಂಡತಿಗೆ ನನ್ನ ಬಗ್ಗೆ ಅಸಹನೆ
ಹೆಚ್ಚಾಗಿ, ನನ್ನಿಂದ ಆಕೆ ಹುಚ್ಚಾಗಿ
ಮಹಾನಗರದ ಮಹಡಿಯೊಂದರಲ್ಲಿ
ಪ್ರಾಣ ತೆಗೆದುಕೊಂಡಳು.
ಅಲ್ಲಿಗೆ ನಾನು ಬೆತ್ತಲಾದೆ
ನನ್ನ ಕಥೆ ಮುಗಿಯಿತು
ಜೈಲಿಗೆ ಹೋಗಬೇಕಾಯಿತು
ಎಂದೆಲ್ಲ ಹತಾಶನಾಗಿ ಕೂತಿದ್ದೆ.
ಆದರೆ ನಮ್ಮೂರಿನ ಮೇಷ್ಟ್ರ ಮಗ
ಭಾಸ್ಕರ ಫೆರ್ನಾಂಡಿಸ್ ಅಲ್ಲಿಂ-
ದಿಲ್ಲಿಗೆ ನನ್ನನು ಬಚಾವ್ ಮಾಡಿದವರು.
ಉಕ್ಕಿ ಹರಿದ ಯಮುನೆಯಲ್ಲಿ
ಆ ಪ್ರಕರಣ ಕೊಚ್ಚಿ ಹೋಯಿತು
ಪ್ರಿಯೆಯ ಪದ್ಮ ನಯನ ಮುಚ್ಚಿ ಹೋಯಿತು.

ಸಂಘದವರು ಪ್ರನಿಧಿಗಳಾಗಬೇಕಾದರೆ
ಸದಾ ಸುಳ್ಳು ಹೇಳಬೇಕು
ಜನರನ್ನು ಪ್ರಚೋದಿಸಬೇಕು.
ಜನರ ಭಾವನೆ ಕೆರಳಿಸಬೇಕು
ಕಲ್ಲು ಹೊಡೆಯಬೇಕು
ಕತ್ತಿ ಮಸೆಯಬೇಕು ಎತ್ತಿ ಕಟ್ಟಬೇಕು
ಹೀಗೆಲ್ಲ ಮಾಡಿ ನಾವು ಗೆದ್ದು ಬರಬೇಕು!
ಜನರ ನಿತ್ಯದ ಬದುಕು-ಬವಣೆ
ನಮಗೆ ಚುನಾವಣೆಯ ವಿಷಯವಲ್ಲ
ಎಂದು ಜನರಿಗೂ ಗೊತ್ತು.

ನಾವು ಕಲ್ಲು ಹೊಡೆದಾಗ ಇಲ್ಲಿನ ಚರ್ಚಿಗೆ
ಅದು ಕೇವಲ ಚುನಾವಣೆಯ ಖರ್ಚಿಗೆ
ಎಂದು ಮಾನ ಉಳಿಸಿದ ಫೆರ್ನಾಂಡಿಸ್‌ಗೂ
ಮತ್ತು ಅವರ ಫೆವಿಕಾಲ್ ಹೆಂಡತಿಗೂ
ಹೇಳಿ ಸಮಧಾನಪಡಿಸಿದ್ದೆ.

ದನಪಾಲ ಚೂರ್ಣ ನನ್ನ ಸಂಘದ ಗೆಳೆಯ,
ಒಂದು ದಿನ ಹೊತ್ತು ಕಂತುವ ಹೊತ್ತಿನಲ್ಲಿ
ಆತ ಫೋನ್ ಮಾಡಿ ಹೇಳಿದ.
ದನ ಸಾಗಾಟ ಮಾಡುತ್ತಿದ್ದ
ಟೆಂಪೋ ಅಡ್ಡ ಹಾಕಿದ್ದೇವೆ
ಹಾಜಬ್ಬ ಹಸನಬ್ಬರನ್ನು ಥಳಿಸಿದ್ದೇವೆ
ಗೋಮಾತೆಯನ್ನು ತಲುಪಬೇಕಾದ
ಜಾಗಕ್ಕೆ ಕಳಿಸಿದ್ದೇವೆ
ಸ್ವಲ್ಪ ಮಾಂಸವನ್ನೂ ಉಳಿಸಿದ್ದೇವೆ
ಇನ್ನೇನು ಮಾಡಲಿ ಎಂದು ಕೇಳಿದ.
ನಾನು ತಕ್ಷಣ ಅಲ್ಲಿಗೆ ಧಾವಿಸಿದೆ.

ಇಬ್ಬರ ಅಂಗಿ ಆಗಲೇ ಕಳಚಿತ್ತು
ನಾನು ಲುಂಗಿಯನ್ನೂ ಕಿತ್ತು ಬಿಸಾಡಿ
ಎಂದು ಆದೇಶ ನೀಡಿದೆ ಮತ್ತು ನೋಡಿದೆ
ಹಾಜಬ್ಬ ಹಸನಬ್ಬ ಇಬ್ಬರೂ ಬೆತ್ತಲೆ!
ವಯಸ್ಸಿಗೆ ಮೀರಿದ ಮುಪ್ಪು
ಸುಕ್ಕುಗಟ್ಟಿದ ಕೈಕಾಲು,
ನಮ್ಮ ಕಾರ್ಯಕರ್ತರ ಒದೆ ತಿಂದು
ರಕ್ತ ಒಸರುತ್ತಿರುವ ಗಾಯಗಳು
ಬೆನ್ನಿಗೆ ಅಂಟಿಕೊಂಡ ಹೊಟ್ಟೆ
ಮುಖದಲ್ಲಿ ಅಸಹಾಯಕ ರೋದನ.
ಆರವತ್ತು ದಾಟಿದ ಮೇಲೆ
ನನ್ನ ಶಿಶ್ನವೂ ಹೀಗೆಯೆ ಸೊರಗಿದರೆ
ಎಂದು ಕಲ್ಪಿಸಿಕೊಂಡು ಒಮ್ಮೆ ದಂಗಾದೆ.

೨.
ಎಲ್ಲವನೂ ಮರೆತು
ಮೊನ್ನೆ ಟಿವಿ ನೋಡುತ್ತಾ ಕೂತಿದ್ದೆ.
ಅದ್ಯಾವುದೋ ಒಂದು ಚಾನೆಲ್‌ನಲ್ಲಿ
ನನ್ನ ಹಾಗೆಯೆ ಕಾಣುವ ಒಬ್ಬ ಮನುಷ್ಯ
ಹಾಸಿಗೆಯ ಬಳಿ ನಗ್ನವಾಗಿ ನಿಂತಿದ್ದ.
ಹೌದು ಅಪ್ಪಟ ನನ್ನ ಹಾಗೆಯೇ ಇದ್ದ.
ಜಗತ್ತಿನಲ್ಲಿ ಒಂದೇ ರೀತಿ ಕಾಣಿಸುವ
ಏಳು ಜನರು ಇರುತ್ತಾರೆ ಎಂದು
ಅಮ್ಮ ಹೇಳಿದ್ದು ನೆನಪಾಯಿತು.
ಹಾಗಾದರೆ ಅದು ನಾನಲ್ಲ ಎಂದು
ನನಗೆ ನಾನೇ ಸಮಾಧಾನ ಹೇಳಿದೆ.
ಆದರೆ ಟಿವಿಯಲ್ಲಿದ್ದ ನಗ್ನ ಮಾನವ
ಕಳಚಿಟ್ಟ ಬಟ್ಟೆಗಳು ನನ್ನದೇ!
ಬಿಳಿ ಪಾಯಿಜಾಮ, ಅದೇ ಬಣ್ಣದ ಕುರ್ತಾ
ಮತ್ತು ಕ್ಯಾಲ್ವಿನ್ ಕ್ಲೇನ್ ಕಂಪೆನಿಯ
ಕೇಸರಿ ಲಂಗೋಟಿ!

ಹಾಸಿಗೆಯಲ್ಲೊಬ್ಬಳು ಚೆಂದದ ಹುಡುಗಿ
ನನ್ನನ್ನು ಕಂಡು ಅಸಹ್ಯಪಟ್ಟು
ನೀನು ಮನುಷ್ಯನಂತೆ ಕಾಣಿಸುತ್ತಿಲ್ಲ
ಎಂದು ಓಡಿ ಹೋಗಿ
ಬಾತ್‌ರೂಮ್‌ನಲ್ಲಿ ಅವಿತುಕೊಂಡಳು.
ನಾನು ಆಗಲೂ ಬೆತ್ತಲೆ ನಿಂತಿದ್ದೆ.

ಟಿ.ವಿಯಲ್ಲಿ ಬಂದವನು ನಾನೇ ಇರಬಹುದೇ
ಎಂಬ ಅನುಮಾನ ಬಂದು ಮೈಬೆವರಿತು.
ನಾನು ಇಷ್ಟು ಬೇಗ ಬೆತ್ತಲಾಗಿಬಿಟ್ಟೆನೆ
ಎಂದು ಕುಳಿತಲ್ಲೇ ಕಂಪಿಸಿದೆ.
ಕನ್ನಡಿ ಎದುರು ಬಂದು ನಿಂತೆ
ಬಟ್ಟೆಗಳನ್ನು ಕಳಚಿ ಎಸೆದೆ.
ಕನ್ನಡಿಯೊಳಗೆ ನನ್ನಂತೆಯೆ ಒಬ್ಬನಿದ್ದ
ಮೈ ತುಂಬಾ ರೋಮಗಳು
ರಕ್ತ ಬೆವರಿನ ವಾಸನೆ
ಆ ಹುಡುಗಿ ಹೇಳಿದ್ದು ನಿಜವೇ ಇರಬೇಕು
ನಾನು ಮನುಷ್ಯನಂತಿಲ್ಲ
ಮೃಗದಂತೆ ಕಾಣಿಸುತ್ತಿದ್ದೇನೆ

ಕನ್ನಡಿಯಲ್ಲಿ ನನ್ನ ಬಿಂಬದ ಹಿಂದೆ
ಇಬ್ಬರು ಇಣುಕುತ್ತಿದ್ದಾರೆ
ನನ್ನನ್ನು ನೋಡಿ ನಗುತ್ತಾ
ಮುಖ ಮುಚ್ಚಿಕೊಳ್ಳುತ್ತಿದ್ದಾರೆ!
ಕಣ್ಣುಜ್ಜಿಕೊಂಡು ನೋಡಿದೆ, ಇದು ಕನಸಲ್ಲ
ಇಬ್ಬರೂ ಶ್ವೇತ ವಸ್ತ್ರಧಾರಿಗಳು
ನನ್ನ ತಂದೆಯ ಪ್ರಾಯದವರು
ಅವರಂತೆಯೆ ಬಿಳಿಯಾದ ಪಂಚೆ
ಮತ್ತು ಅರ್ಧ ತೋಳಿನ ಬಿಳಿ ಅಂಗಿ.
ಆ ಮುಖಗಳ ನೆನಪಾಗಿ ಬೆಚ್ಚಿ ಬಿದ್ದೆ.
ಅಯ್ಯೋ ಈ ಕನ್ನಡಿಯಲ್ಲಿ
ನನ್ನ ಹಿಂದೆ ಇರುವುದು ಹಾಜಬ್ಬ ಹಸನಬ್ಬ.
ಅಂದು ನನ್ನೂರ ನಡುಬೀದಿಯಲ್ಲಿ
ನಾನೇ ಅವರನ್ನು ಬೆತ್ತಲು ಮಾಡಿದ್ದೆ.
ಈಗ ನಾನು ಜಗತ್ತಿನ ಎದುರು
ಸಂಪೂರ್ಣ ನಗ್ನವಾಗಿ ನಿಂತಿದ್ದೇನೆ.

ತಂತ್ರಜ್ಞಾನ ಎಷ್ಟೊಂದು ಮುಂದುವರಿದಿದೆ
ನಾನು ಎಷ್ಟು ಬೇಗ ಬೆತ್ತಲಾದೆ
ನಾನು ಎಷ್ಟು ಬೇಗ ಬೆತ್ತಲಾದೆ.
-ಶಶಿಧರ ಹೆಮ್ಮಾಡಿ, ಕುಂದಾಪುರ




















ಬೆನ್ನಿ ಹಿನ್‌ ಬಾಬಾನನ್ನು ವಿರೋಧಿಸೋಣ- ಬೆನ್‌ ಹಿಂದೆನೂ ಒಮ್ಮೆ ನೋಡಿಕೊಳ್ಳೋಣ




 ಬೆನ್ನಿ ಹಿನ್ಬಾಬಾನನ್ನು ವಿರೋಧಿಸೋಣ

ಬೆನ್ಹಿಂದೆನೂ ಒಮ್ಮೆ ನೋಡಿಕೊಳ್ಳೋಣ



ಬೇವಕೂಫೋಂ ಕಿ ಕಮಿ ನಹಿ
ಏಕ್ಢೂಂಡೊ ಹರಝಾರ್ಮಿಲ್ತೆಂ ಹೈಂ
(ಮೂರ್ಖರಿಗೇನೂ ಕೊರತೆ ಇಲ್ಲ, ಒಬ್ಬರನ್ನು ಹುಡುಕಿದರೆ ಸಾವಿರ ಮಂದಿ ಸಿಗುತ್ತಾರೆ)

ದಿನ ಬೆಳಗಾದರೆ ಧರ್ಮದ ಹೆಸರಿನಲ್ಲಿ, ಧರ್ಮ ಗ್ರಂಥಗಳ ಹೆಸರಿನಲ್ಲಿ, ಜ್ಯೋತಿಷ್ಯ-ವಾಸ್ತು ಎಂದೆಲ್ಲ ನಮ್ಮನ್ನು ಮೂರ್ಖರನ್ನಾಗಿಸಲು ಟಿವಿ ಚಾನೆಲ್ಗಳು ಕಾದು ಕೂತಿರುತ್ತವೆ. ದೇವರನ್ನು ಆರಾಧಿಸಲಿಕ್ಕೇಂದೇ ಪ್ರತ್ಯೇಕ ಚಾನೆಲ್ಗಳಿವೆ. ಕುರಾನ್‌, ಬೈಬಲ್‌, ಗೀತೆಗಳನ್ನು ಬೋಧನೆ ಮಾಡುವ ಚಾನೆಲ್ಗಳು, ರೇಡಿಯೋ ಸ್ಟೇಷನ್ಗಳೂ ಇವೆ. ಇಂಟರ್ನೆಟ್ನಲ್ಲಿಯೇ ತಿರುಪತಿ ತಿಮ್ಮಪ್ಪನಿಗೂ, ಶಿರಡಿ ಸಾಯಿಬಾಬಾನಿಗೂ ಆರತಿ ಬೆಳಗಲು, ಪೂಜೆ ಮಾಡಲು, ಕಾಣಿಕೆ ಹಾಕಲು ವ್ಯವಸ್ಥೆ ಇದೆ. ಬಗೆಬಗೆಯ ಪೋಷಾಕು ಧರಿಸಿದ, ವಿವಿಧ ಆಕೃತಿಯ ನಾಮಗಳನ್ನು ಧರಿಸಿದ "ಸ್ವಾಮಿಗಳ' ಬಾಯಿಂದ ಬಂದ ಮಾತನ್ನೇ ಪ್ರವಚನ ಎಂದು ತನ್ಮಯರಾಗಿ ಕೇಳುವ ಜನರು, ಕುರಾನ್ ಒಂದೊಂದು ವಾಕ್ಯವನ್ನೂ ಅದು ಯಾವ ಪುಟದಲ್ಲಿದೆ ಎಂದು ಕರಾರುವಕ್ಕಾಗಿ ಹೇಳುತ್ತಾ ಎಲ್ಲದಕ್ಕೂ ಇಲ್ಲಿದೆ ಪರಿಹಾರ ಎಂದು ಮಂಕುಬೂದಿ ಎರಚುವ ರಝಾಕೀರ್ನಾಯ್ಕ್ಗಳು, "ಗಾಡ್ಸೆಡ್‌, ಯು ವಿಲ್ಗೋ ಟು ಹೆಲ್‌' ಎಂದು ಗಂಡಸೊಬ್ಬ ಹೇಳಿದರೆ ಹೆಂಗಸೊಬ್ಬಳು "ದೇವರು ಹೇಳಿದ, ನೀನು ನರಕಕ್ಕೆ ಹೋಗುವಿ' ಎಂದು ಅಷ್ಟೇ ವೇಗದಲ್ಲಿ ಭಾಷಾಂತರ ಮಾಡಿ ಭಯ ಹುಟ್ಟಿಸುವ ಜೋಡಿಗಳು ಟಿವಿ ಪರದೆಗಳಲ್ಲಿ ಅದೆಷ್ಟು ವ್ಯಸ್ತರಾಗಿದ್ದಾರೆ.

ಮೌಢ್ಯವನ್ನು ಮಟ್ಟ ಹಾಕಲು ಕಾನೂನು ತರುತ್ತೇವೆ ಎಂದು ಸರಕಾರ ಹೊರಟರೆ ಮೌಢ್ಯ ವಿರೋಧಿ ಕಾನೂನನ್ನೇ ವಿರೋಧಿಸಿ ಚಾನೆಲ್ಗಳಲ್ಲಿ ಚರ್ಚೆಗಳು ನಡೆಯುತ್ತವೆ. ವಿಜ್ಞಾನಿಗಳನ್ನೋ, ವಿಚಾರವಾದಿಗಳನ್ನೋ ಚರ್ಚೆಗಳಿಗೆ ಕರೆಯದೆ ಜ್ಯೋತಿಷಿಗಳನ್ನು, ಸ್ವಾಮೀಜಿಗಳನ್ನು ಕರೆದು ಮೌಢ್ಯವೇ ವಿಜ್ಞಾನ ಎಂದು ನಂಬಿಸುವ ಕೆಲಸಗಳು ನಡೆಯುತ್ತಿವೆ. ಜ್ಯೋತಿಷ್ಯವೇ ಒಂದು ದೊಡ್ಡ ಢೋಂಗಿ. ಆದರೂ ನಮ್ಮ ಚಾನೆಲ್ಗಳು ಢೋಂಗಿ ಜ್ಯೋತಿಷಿಗಳು, ಢೋಂಗಿ ಬಾಬಾಗಳು ಎಂದು ಪ್ರತ್ಯೇಕ ಕ್ಯಾಟಗರಿಯೊಂದನ್ನು ಹುಟ್ಟುಹಾಕಿ ಅವರ ವಿರುದ್ಧ ಕಾರ್ಯಾಚರಚರಣೆ ಕೈಗೊಂಡಂತೆ ನಾಟಕ ಮಾಡಿ ತಮ್ಮ ಚಾನೆಲ್ಗಳಲ್ಲಿ ಬರುವ ಜ್ಯೋತಿಷಿಗಳು, ಬಾಬಾಗಳೇ ಅಸಲಿ ಎಂದು ಅವರ ಮಾರ್ಕೆಟ್ಹೆಚ್ಚಿಸುವ ಕೆಲಸ ಮಾಡುತ್ತಿವೆ. ರವಿಶಂಕರ ಗುರೂಜಿ, ನಿತ್ಯಾನಂದ, ಪೇಜಾವರ ಸ್ವಾಮಿ, ಬಾಬಾ ರಾಮ್ದೇವ್‌, ಆಸಾರಾಂ ಬಾಪೂ, ನಿರ್ಮಲ್ಬಾಬಾ, ಕಾಳಿ ಸ್ವಾಮಿ, ಬ್ರಹ್ಮಾಂಡ ಗುರೂಜಿ ಮುಂತಾದವರೆಲ್ಲ ನಿತ್ಯವೂ ನಮ್ಮ ಜನರನ್ನು ತಮ್ಮ ಮಾತು-ಕೃತಿಗಳ ಮೂಲಕ ಮೂರ್ಖರನ್ನಾಗಿಸುತ್ತಿದ್ದಾರೆ. ಇಷ್ಟೆಲ್ಲ ಇರುವ ದೇಶದಲ್ಲಿ ಇವರದೇ ಸಂತತಿಗೆ ಸೇರಿರುವ ಅವನ್ಯಾವನೋ ಒಬ್ಬ ಬೆನ್ನಿ ಹಿನ್ಬೆಂಗಳೂರಿಗೆ ಬರುತ್ತಾನೆಂದರೆ ಚೆಡ್ಡಿಗಳು ತಮ್ಮ ಚೆಡ್ಡಿ ಹರಿದು ಹೋದಂತೆ ಆಡುತ್ತಿದ್ದಾರೆ. ಮೇಲೆ ಹೇಳಿದ ಸ್ವಾಮಿಗಳು, ಬಾಬಾಗಳು, ಜ್ಯೋತಿಷಿಗಳು ಎಲ್ಲರೂ ಅದೇನೋ ಸುನಾಮಿ ಬರುತ್ತಿದೆ ಎಂಬಂತೆ ಭಯಹುಟ್ಟಿಸುತ್ತಿವೆ. ಅಷ್ಟಕ್ಕೂ ಈತನಿಗೂ ಮತ್ತು ನಮ್ಮ ದೇಶದ ರವಿಶಂಕರ್-ರಾಮ್ದೇವ್-ಝಾಕೀರ್ನಾಯ್ಕ್ಮುಂತಾದವರಿಗೂ ಇರುವ ವ್ಯತ್ಯಾಸಗಳೆಂದರೆ ಬೆನ್ನಿ ಹಿನ್ಇವರೆಲ್ಲರಿಗಿಂತ ಹೆಚ್ಚು ಶ್ರೀಮಂತ ಮತ್ತು ಇವರೆಲ್ಲರಿಗಿಂತ ಹೆಚ್ಚು ವೈಭವದಿಂದ ಜೀವನ ಸಾಗಿಸುತ್ತಿದ್ದಾನೆ ಮತ್ತು ಆತನ ಮೋಡಸ್ಒಪೆರಾಂಡಿ ಬೇರೆ ಎನ್ನುವುದು ಮಾತ್ರ.

ಬೆನ್ನಿ ಹಿನ್ಹೋದಲ್ಲೆಲ್ಲ ಆತನ ಒಂದು ಸ್ಪರ್ಶಕ್ಕೆ-ಹೀಲಿಂಗ್ಟಚ್-ಲಕ್ಷಾಂತರ ಜನ ಕಾಯುತ್ತಾರೆ. ಈತ ಮುಟ್ಟಿದರೆ ನಿಮ್ಮ ಕಾಲು ನೋವು, ಸಂಧಿವಾತ, ಹೊಟ್ಟೆ ನೋವು, ಮಧುಮೇಹ, ಕ್ಯಾನ್ಸರ್ಎಲ್ಲವೂ ಗುಣವಾಗುತ್ತದಂತೆ. ಈತ ಮುಟ್ಟಿದ ಎಂದರೆ ನಡೆಯಲಿಕ್ಕಾಗದವರು ನಡೆದಾಡುತ್ತಾರೆ, ಕಿವುಡರ ಕಿವಿ ಕೇಳಿಸುವಂತಾಗುತ್ತದೆ, ಕುರುಡನಿಗೆ ಕಣ್ಣು ಬರುತ್ತದೆ, ಲಕ್ವ ಬಡಿದವನ ಅಂಗಾಂಗಗಳು ಮತ್ತೆ ಚಟುವಟಿಕೆಯಿಂದ ಪುಟಿದೇಳುತ್ತವೆ ಎಂದೆಲ್ಲ ಹೇಳಲಾಗುತ್ತದೆ. ಹಾಗಂತ ಪ್ರಚಾರ ಮಾಡಿಕೊಳ್ಳಲು ಆತನದೇ ಟಿವಿ ಚಾನೆಲ್ಗಳಿವೆ, ಶೋಗಳಿವೆ, ಪುಸ್ತಕಗಳಿವೆ ಮತ್ತು ಇನ್ನೂ ನಾನಾ ವಿಧಾನಗಳಿವೆ. ಇದಕ್ಕೆಲ್ಲ ಮರುಳಾದ ಲಕ್ಷಾಂತರ ಮಂದಿ ಯೇಸುವೇ ಕಳುಹಿಸಿದ ದೇವದೂತ ನಮ್ಮ ಊರಿಗೆ ಯಾವಾಗ ಬರುತ್ತಾನೆಂದು ಹಾತೊರೆಯುತ್ತಾರೆ. 2005ರಲ್ಲಿ ಬೆಂಗಳೂರಿಗೆ ಬಂದಿದ್ದ ಬೆನ್ನಿ ಹಿನ್ ಸಮಾವೇಶಕ್ಕೆ ದಾಖಲೆ ಸಂಖ್ಯೆಯ ಜನರು ನೆರೆದಿದ್ದರು. ಅದು ಬೆನ್ನಿ ಹಿನ್ ವೆಬ್ಸೈಟ್ನಲ್ಲಿಯೂ ದಾಖಲಾಗಿದೆ. ಈಗ ಆತ ಮತ್ತೆ ಜನವರಿ ತಿಂಗಳಲ್ಲಿ ಬೆಂಗಳೂರಿಗೆ ಬರುತ್ತಿದ್ದಾನೆ.

ಬೆನ್ನಿ ಹಿನ್ಇಸ್ರೇಲ್ನಲ್ಲಿ ಹುಟ್ಟಿದವನು. ಅರಬ್-ಇಸ್ರೇಲ್ಯುದ್ಧದ ತರುವಾಯ ಕೆನಡಾಕ್ಕೆ ವಲಸೆ ಹೋಗಿ ಈಗ ಅಮೇರಿಕದಲ್ಲಿ ನೆಲೆಸಿದ್ದಾನೆ. ಅಮೇರಿಕದ ಬುದ್ಧಿವಂತ ಜನರಿಗೆ ಈತ ಎಂತಹ ಮಂಕುಬೂದಿ ಎರಚಿದ್ದಾನೆಂದರೆ ಈತನ ಧಾರ್ಮಿಕ ಸಭೆಗಳು ನಡೆಯುವುದೇ ಅಲ್ಲಿನ ದೊಡ್ಡ ಸ್ಟೇಡಿಯಂಗಳಲ್ಲಿ. ಈತನ ದೈನಂದಿನ 30 ನಿಮಿಷಗಳ ಟೆಲಿವಿಷನ್ಶೋ "ದಿಸ್ಇಸ್ಯುವರ್ಡೇ' ವಿಶ್ವದಾದ್ಯಂತ ಹಲವು ಚಾನೆಲ್ಗಳಲ್ಲಿ ಪ್ರಸಾರವಾಗುತ್ತಿದೆ ಮತ್ತು ಅತ್ಯಂತ ಹೆಚ್ಚು ವೀಕ್ಷಕರನ್ನು ಶೋ ಹೊಂದಿದೆ. ರೋಗಿಗಳು ಎಂದು ವೇದಿಕೆ ಹತ್ತಿದವರ ಮೈ ಮುಟ್ಟಿದ ಕೂಡಲೇ ಅವರು ಅಲ್ಲಿಯೇ ಕುಸಿದು ನೆಲಕ್ಕೊರಗುವುದು ಮತ್ತು ರೋಗಿಗಳು ರೋಗ ಗುಣಮುಖರಾದಂತೆ ವರ್ತಿಸುವುದನ್ನು ನೀವು ಯಾವತ್ತಾದರೂ ಟಿವಿ ಚಾನೆಲ್ಗಳಲ್ಲಿ ನೋಡಿರುತ್ತೀರಿ. ಈತ ಬರೆದ ಹತ್ತಾರು ಪುಸ್ತಕಗಳು ದಾಖಲೆಸಂಖ್ಯೆಯಲ್ಲಿ ಮಾರಾಟವಾಗಿದೆ. ಈತನ ಸಭೆಗಳಿಗೆ ನೀವು ಹೋಗಬೇಕೆಂದರೆ ದುಬಾರಿ ಶುಲ್ಕವೂ ಇದೆ. ಬೆಂಗಳೂರಿನಲ್ಲಿಯೂ ಈತನ ದರ್ಶನಕ್ಕೆ "ಭಕ್ತಾದಿಗಳು' ಸಾವಿರ ರೂಪಾಯಿ ಕಾಣಿಕೆ ನೀಡಿಯೇ ಹೋಗಬೇಕು.


ನಿಜಕ್ಕೂ ಈತನ ಸ್ಪರ್ಶ ರೋಗಗಳನ್ನು ಗುಣಪಡಿಸುತ್ತದೆಯೆ? ಈತನೇನು ದೈವಾಂಶ ಸಂಭೂತನೆ? ಖಂಡಿತ ಅಲ್ಲ. ಈತ ನಮ್ಮ ಭಾರತೀಯ ಬಾಬಾಗಳಂತೆಯೆ ಒಬ್ಬ ವಂಚಕ. ಯಾರನ್ನೂ ಮರುಳು ಮಾಡಬಲ್ಲ ಮಾತುಗಾರಿಕೆ, ನೋಡಿದರೆ ನಂಬಬೇಕು ಎಂಬಂತಹ ರೂಪ, ಸುಳ್ಳನ್ನೇ ಸತ್ಯ ಮಾಡುವ ಜಾಣ್ಮೆ ಮತ್ತು ಪ್ರಚಾರ ಈತನ ಬಂಡವಾಳ. "ದೇವರು ನನ್ನೊಳಗೆ ಬಂದಿದ್ದಾನೆ, ನನ್ನು ಮೂಲಕ ನಿಮ್ಮನ್ನೆಲ್ಲ ಆತ ತಲುಪುತ್ತಾನೆ, ನಿಮ್ಮ ರೋಗಗಳನ್ನು ವಾಸಿ ಮಾಡಲು ಆತ ನನ್ನೊಳಗೆ ಇದ್ದಾನೆ, ನನ್ನ ಸ್ಪರ್ಶದಿಂದ ನಿಮ್ಮ ದೇಹದೊಳಕ್ಕೆ ಒಂದು ಬೆಚ್ಚನೆಯ ಅನುಭವ ಬಂದು ನಿಮ್ಮ ರೋಗಗಳಿಂದ ನೀವು ಮುಕ್ತರಾಗುವಿರಿ' ಎಂದೆಲ್ಲ ಬೆನ್ನಿ ಹಿನ್ಬೊಗಳೆ ಬಿಡುತ್ತಾನೆ. "ನನ್ನೊಳಗೆ ಯೇಸು ಅಭಿಷಿಕ್ತನಾಗಿದ್ದಾನೆ, ನನ್ನೊಳಗೆ ದೇವರ ಶಕ್ತಿಯಿಂದ ಮಹಾಕಂಪನವಾಗುತ್ತಿದೆ, ನನ್ನ ಅನುಭವಕ್ಕೆ ಯೇಸು ಬರುತ್ತಿದ್ದಾನೆ' ಎಂದೂ ಹೇಳುವ ಈತ ಮಾಡುವುದೆಲ್ಲ ಕಣ್ಣಿಗೆ ಮಣ್ಣೆರಚುವ ಕೆಲಸ. ಈತ ಎಂತಹ ಮೋಸಗಾರನೆಂಬುದನ್ನು ಅಮೇರಿಕದ ಅನೇಕ ಮಾಧ್ಯಮಗಳು ತಮ್ಮ ಕುಟುಕು ಕಾರ್ಯಾಚರಣೆಗಳ ಮೂಲಕ, ಹಿಡನ್ಕ್ಯಾಮೆರಾಗಳ ಮೂಲಕ ಜಗತ್ತಿಗೆ ತೋರಿಸಿಕೊಟ್ಟಿವೆ. ಉಡುಪಿ ಜಿಲ್ಲೆಯ ಸಾಲಿಗ್ರಾಮದಲ್ಲಿ ಡಿವೈನ್ಪಾರ್ಕ್ಎಂಬ ಮಠ ನಿರ್ಮಿಸಿ ಕೋಟಿಗಟ್ಟಲೆ ದುಡ್ಡು ಮಾಡಿರುವ ವ್ಯಕ್ತಿಯೊಬ್ಬ ತನ್ನೊಳಗೆ ವಿವೇಕಾನಂದ ಇದ್ದಾನೆ ಎಂದು ಹೇಳುತ್ತಿರುವುದು ನೆನಪಾಗುತ್ತಿದೆ.

ಬೆನ್ನಿ ಹಿನ್ ಸಭೆಗಳಲ್ಲಿ ಆತನ ಬಾಡಿಗಾರ್ಡ್ಗಳ ದೊಡ್ಡ ಪಡೆಯೇ ಇರುತ್ತದೆ. ಮುಂದಿನ ಸಾಲುಗಳನ್ನು ದೊಡ್ಡ ದಾನಿಗಳು, ಗಣ್ಯರಿಗೆ ಮೀಸಲಾಗಿಡಲಾಗಿರುತ್ತದೆ. ಈತನ ಸ್ಪರ್ಶದ ಮಾಯೆಯ ಪ್ರಚಾರ ಕೇಳಿ ಬಂದ ರೋಗಿಗಳು, ಅಶಕ್ತರು, ಗಾಲಿ ಕುರ್ಚಿಗಳಲ್ಲಿ ಬಂದವರು ಹಿಂದಿನ ಸಾಲುಗಳಲ್ಲಿ ಇರುತ್ತಾರೆ. ದೊಡ್ಡ ಆರ್ಕೆಸ್ಟ್ರಾದ ಸಂಗೀತ, ಭ್ರಮಾಲೋಕ ಸೃಷ್ಟಿಸುವ ಬೆಳಕು, ಎಲ್ಲರೂ ದಿಗ್ಭ್ರಾಂತರಾಗಬೇಕೆಂದೇ ನಿರ್ಮಿಸಿದ ಕೃತಕವಾದ ವಾತಾವರಣ ಈತನ ಎಲ್ಲ ಸಭೆಗಳಲ್ಲೂ ಇರುತ್ತದೆ. ಈತನ ಸ್ಪರ್ಶಕ್ಕಾಗಿ ಮುಂದೆ ಬರುವವರಲ್ಲಿ ಹೆಚ್ಚಿನವರು ಮಾಡುವುದು ನಾಟಕ ಮಾತ್ರ. ಅದರಲ್ಲಿ ಕೆಲವರು ಈತನ ಬಾಡಿಗಾರ್ಡ್ಗಳೇ ಬೇರೆ ವೇಷದಲ್ಲಿ ಬಂದಿರುವರು. ಈತ ಮುಟ್ಟಿದ ಕೂಡಲೇ ಅಡ್ಡ ಬೀಳುವುದು-ಏಳುವುದು ಎಲ್ಲವೂ ನಾಟಕ ಮಾತ್ರ. ಕೆಲವರನ್ನು ಈತ ಸಮ್ಮೋಹಿನಿಗೆ ಒಳಗಾಗಿಸುವುದೂ ಇದೆ. ಈತ ಮುಟ್ಟುವ ಹೆಚ್ಚಿನ ರೋಗಿಗಳ ಕಾಯಿಲೆ ಕಣ್ಣಿಗೆ ಕಾಣದಕಾಯಿಲೆಗಳು. ಅರ್ಥಾತ್ಕ್ಯಾನ್ಸರ್ಮುಂತಾದ ದೇಹದ ಒಳಗಿನ ರೋಗಗಳು. ಈತ ಮುಟ್ಟಿದ ಕೂಡಲೇ ನಿಮ್ಮ ರೋಗ ವಾಸಿಯಾಗಿದೆ ಅಥವಾ ಕ್ಷಣ ವಾಸಿಯಾಗಿಲ್ಲ ಎಂದರೆ ದೇವರು ಬಯಸಿದ ಕೂಡಲೇ ವಾಸಿಯಾಗುತ್ತದೆ ಎಂದು ಹೇಳುತ್ತಾನೆ. ಈತ ಮುಟ್ಟಿದ ಕೂಡಲೇ ಗಾಲಿ ಕುರ್ಚಿಯಲ್ಲಿರುವ ವ್ಯಕ್ತಿ ಎದ್ದು ನಿಂತಂತೆ ತೋರಿಸಲಾಗುತ್ತದೆ. ಕಿವುಡನಿಗೆ ಕಿವಿ ಕೇಳಿಸಿದಂತೆ ತೋರಿಸಲಾಗುತ್ತದೆ. ಆದರೆ ಇದೆಲ್ಲವೂ ಈತನ ವಂಚನೆಯ ಭಾಗವೇ ಆಗಿರುತ್ತದೆ. ಈತನ ಸಭೆಗಳಿಗೆ ಬರುವ ನಿಜವಾಗಿಯೂ ಕೈ ಕಾಲುಗಳಲ್ಲಿ ಬಲಹೀನತೆ ಇರುವ ಜನಗಳು, ಲಕ್ವ ಬಡಿದ ರೋಗಿಗಳು, ದೇಹದಲ್ಲಿ ಚಲನೆ ಕಳೆದುಕೊಂಡ ರೋಗಿಗಳು ವೇದಿಕೆ ಹತ್ತಲಿಕ್ಕೂ ಈತನ ಸಭೆಗಳಲ್ಲಿ ಅವಕಾಶವಿಲ್ಲ. ಅಮೇರಿಕದ ಮಾಧ್ಯಮಗಳು ನಡೆಸಿದ ಕಾರ್ಯಾಚರಣೆಗಳಲ್ಲಿ ಇದು ಸ್ಪಷ್ಟವಾಗಿ ಕ್ಯಾಮೆರಾಗಳಲ್ಲಿ ದಾಖಲಾಗಿದೆ. ಯಾರಿಗೆ ಎದ್ದು ನಿಲ್ಲಲು ಸಾಧ್ಯವಿಲ್ಲಮೋ ಅವರನ್ನು ಈತನ ಬಾಡಿಗಾರ್ಡ್ಗಳು ಬೇರೆ ದಿಕ್ಕಿಗೆ ಕಳುಹಿಸುತ್ತಾರೆ. ಒಂದೊಮ್ಮೆ ಅಂತಹ ವ್ಯಕ್ತಿಗಳು ಅಥವಾ ಅವರ ಸಂಬಂಧಿಗಳು ಬೆನ್ನಿ ಹಿನ್ತಮ್ಮನ್ನು ಮುಟ್ಟಲೇಬೇಕೆಂದು ಹಠ ಮಾಡಿದರೆ, ವೇದಿಕೆ ಏರುವ ಪ್ರಯತ್ನ ಮಾಡಿದರೆ ಅಂತಹ ವ್ಯಕ್ತಿಗಳಿಗೆ ಹಿಂದಕ್ಕೆ ಕರೆದುಕೊಂಡು ಹೋಗಿ ಎಚ್ಚರಿಕೆ ನೀಡಲಾಗುತ್ತದೆ ಅಥವಾ ಅವರ ಮೇಲೆ ಹಲ್ಲೆ ನಡೆಸಿ ಬಾಯಿ ಮುಚ್ಚಿಸಲಾಗುತ್ತದೆ. ಇಂತಹ ಹಲ್ಲೆಗಳನ್ನು ನಡೆಸಿದ ಆರೋಪಗಳು ಸ್ವತಃ ಬೆನ್ನಿ ಹಿನ್ಮಗನ ಮೇಲೂ ಇದೆ. ಎಲ್ಲ ನಾಟಕವನ್ನೂ ಮೊದಲೇ ವ್ಯವಸ್ಥಿತವಾಗಿ ಯೋಜಿಸಿರಲಾಗುತ್ತದೆ.

ನರೇಂದ್ರ ಮೋದಿ ಭಾರತದ ಇತಿಹಾಸದ ಬಗ್ಗೆ ಸುಳ್ಳು ಹೇಳುವುದರಲ್ಲಿ ನಿಸ್ಸೀಮನಾದರೆ ಬೆನ್ನಿ ಹಿನ್ಬೈಬಲ್ಬಗ್ಗೆ ಪದೇಪದೇ ಸುಳ್ಳು ಹೇಳುತ್ತಾನೆ. ಬೈಬಲ್ನಲ್ಲಿ ಹೇಳಿದ್ದೋಂದು. ಈತ ಹೇಳುವುದೇ ಇನ್ಣೆೊಂದು. ಈತ ಭವಿಷ್ಯ ಕೂಡ ಹೇಳುತ್ತಾನೆ. ಎಂತಹ ಭವಿಷ್ಯಗಳೆಂದರೆ ಕೆಲ ಸ್ಯಾಂಪಲ್ಗಳು ಇಲ್ಲಿವೆ. 1995ರಲ್ಲಿ ಅಮೇರಿಕದಲ್ಲಿ ಸಲಿಂಗರತಿ ನಿರ್ನಾಮವಾಗುತ್ತದೆ ಎಂದು ಹೇಳಿದ. 2000ನೇ ಇಸವಿಯಲ್ಲಿ ಅಮೇರಿಕದ ಪೂರ್ವ ಕರಾವಳಿ ಭೂಕಂಪದಲ್ಲಿ ಸಂಪೂರ್ಣ ನಾಶವಾಗಿ ಹೋಗುತ್ತದೆ ಎಂದು ಹೆದರಿಸಿದ. ಕ್ಯೂಬಾದ ಫಿಡೆಲ್ಕಾಸ್ಟ್ರೋ 1990ರಲ್ಲಿ ಸಾಯುತ್ತಾನೆ ಎಂದು ಭವಿಷ್ಯ ನುಡಿದ. ಇವೆಲ್ಲ ಭವಿಷ್ಯಗಳೂ ಠುಸ್ಆಯಿತು. ಇನ್ನೂ ತಮಾಷೆಯ ವಿಷಯವೆಂದರೆ 1999ರಲ್ಲಿ ಟಿಬಿಎನ್ನೆಟ್ವರ್ಕ್ಎಂಬ ಚಾನೆಲ್ಒಂದರಲ್ಲಿ ಕಾಣಿಸಿಕೊಂಡ ಬೆನ್ನಿ ಹಿನ್ದೇವರು ತನಗೆ ಅದ್ಭುತವಾದ ಶಕ್ತಿಯೊಂದನ್ನು ನೀಡಿದ್ದು ತನ್ನು ಬೋಧನೆ ನಡೆಯುವ ವೇಳೆ ಟಿವಿ ಪರದೆ ಮುಟ್ಟಿದರೆ ಗೋರಿಯಲ್ಲಿರುವ ನಿಮ್ಮ ಬಂಧುಗಳು ಮರುಜನ್ಮ ಪಡೆಯುತ್ತಾರೆ ಎಂದು ಹೇಳಿದ. ಅಂದರೆ ಸತ್ತ ವ್ಯಕ್ತಿಗಳು ಬಂದು ಟಿವಿ ಪರದೆಮುಟ್ಟಿದರೆ ಅವರಿಗೆ ಮರುಜೀವ ಬರುತ್ತದೆ ಎಂದು ಆತ ಪ್ರತಿಪಾದಿಸಿದ್ದ. ಇದೆಲ್ಲವೂ ದೇವೇಗೌಡರ ಅಚ್ಚುಮೆಚ್ಚಿನ ಕೋಡಿ ಮಠದ ಸ್ವಾಮಿ ಹೇಳುವ ಭವಿಷ್ಯದಷ್ಟೇ ಅಗ್ಗದ ಮತ್ತು ಹಾಸ್ಯಾಸ್ಪದ ಭವಿಷ್ಯವಾಣಿಯಾಗಿಯೇ ಉಳಿಯಿತು. ತನ್ನು ಟೀಕಾಕಾರರಿಗೆ ಈತ ಶಾಪ ಬೇರೆ ಕೊಡುತ್ತಾನೆ. ಕ್ಯಾಲಿಫೋರ್ನಿಯಾದ ಜನ ಈತನ ವಿರುದ್ಧ ಮಾತನಾಡಿದಾಗ "ನೀವು ಇದನ್ನು ದೇವರ ಸೇವಕನ ಬಾಯಿಂದ ಕೇಳಿರಿ, ನೀವು ಅಪಾಯದಲ್ಲಿದ್ದೀರಿ, ನಿಮ್ಮ ತಲೆಯ ಮೇಲಿಂದ ದೇವರ ಕೈ ಮಾಯವಾಗಲಿದೆ. ನೀವು ಸೋಲುವಿರಿ, ನಿಮ್ಮ ಮಕ್ಕಳು ನಿಮ್ಮ ಪಾಪವನ್ನು ಅನುಭವಿಸುತ್ತಾರೆ' ಎಂದೆಲ್ಲ ಬಡಬಡಾಯಿಸಿದ್ದನಂತೆ.

ಈತನ ವಂಚನೆಯಲ್ಲಿ ಈತನ ಹೆಂಡತಿ ಮತ್ತು ಮಕ್ಕಳೂ ಸಹಕಾರ ನೀಡುತ್ತಿದ್ದಾರೆ. ಒಮ್ಮೆ ತನ್ನು ಹೆಂಡತಿ ಸುಝನ್ಜೊತೆ ವಿಚ್ಛೆದನ ಪಡೆದ ಈತ ಬೇರೆ ಹೆಂಗಸರೊಡನೆ ಸಂಬಂಧ ಬೆಳೆಸಿದ. ಮತ್ತೆ ತನ್ನು ಕುಕೃತ್ಯಗಳು ಬಹಿರಂಗಕ್ಕೆ ಬರುತ್ತಿದ್ದ ಹಾಗೆ ಪುನಃ ಸುಝನ್ಳನ್ನು ಮರುಮದುವೆಯಾದ. ಅಮೇರಿಕದಲ್ಲಿ ಅತ್ಯಂತ ವೈಭವದ ಜೀವನ ನಡೆಸುತ್ತಿರುವ "ದೇವಮಾನವ' ಪ್ರತಿ ವರ್ಷ ನೂರು ಮಿಲಿಯನ್ಡಾಲರ್ಗಿಂತ ಹೆಚ್ಚು ಸಂಪಾದನೆ ಮಾಡುತ್ತಾನೆ. ಅತ್ಯಂತ ದುಬಾರಿಯಾದ ಜಾಗದಲ್ಲಿ ಈತನ ಬೃಹತ್ಮನೆ ಇದೆ. ಈತ ಓಡಾಡುವ ವಿಮಾನ ಅತ್ಯಂತ ದುಬಾರಿಯಾದವಿಮಾನ. ವಿಮಾನದ ನಿರ್ವಹಣಾ ವೆಚ್ಚವೇ ವರ್ಷಕ್ಕೆ 6 ಮಿಲಿಯನ್ಡಾಲರ್ಗಳು. ಈತನಿಗೆ ದಾನವಾಗಿ ಬರುವ ಹಣಕ್ಕೆ ಲೆಕ್ಕವಿಲ್ಲ. ಅಮೇರಿಕದ ಸರಕಾರ ಈತನ ಅಕ್ರಮ ಗಳಿಕೆ, ಲೆಕ್ಕಪತ್ರಗಳಿಲ್ಲದ ವ್ಯವಹಾರದ ವಿರುದ್ಧ ತನಿಖೆಗೆ ಆದೇಶಿಸಿದೆ. ರಾಮ್ದೇವ್ಬಾಬಾನಿಗೆ ಇವನೇ ಮಾದರಿಯಾಗಿರಬೇಕು. ಈಗ ಬೆನ್ನಿ ಹಿನ್ಎಂಬ ಮಹಾ ವಂಚಕ ಬೆಂಗಳೂರಿಗೆ ಬಂದು ಮತ್ತೊಮ್ಮೆ ಈತನ "ಭಕ್ತಾದಿಗಳಿಗೆ' ಮೋಸದ ಸ್ಪರ್ಶ ಮತ್ತು ದರ್ಶನ ನೀಡಿ ಕೋಟ್ಯಂತರ ರೂ ಕಾಣಿಕೆ ಪಡೆದು ಮರಳಲಿದ್ದಾನೆ.

ಬೆನ್ನಿ ಹಿನ್ಬೆಂಗಳೂರಿಗೆ ಬಂದು ಜನರನ್ನು ವಂಚಿಸುವುದನ್ನು ಖಂಡಿತ ತಡೆಯಬೇಕಾಗಿದೆ. ವಿಚಾರವಂತರೆಲ್ಲ ಈತನ ವಿರುದ್ಧ ದನಿ ಎತ್ತಬೇಕಾಗಿದೆ. ಜನರು ಈತ ಪ್ರಚುರಪಡಿಸುವ ಮೌಢ್ಯದಿಂದ ಹೊರಬರಬೇಕಾಗಿದೆ. ಇದೆಲ್ಲ ಸರಿ. ಆದರೆ ಬೆನ್ನಿ ಹಿನ್ಮೌಢ್ಯವನ್ನು ಬಿತ್ತುತ್ತಾನೆಂದೂ ಮತ್ತು ಕಾರಣಕ್ಕೆ ಆತನನ್ನು ಭಾರತಕ್ಕೆ ಬರಲು ಬಿಡಬಾರದೆಂದೂ ಪೇಜಾವರ ಸ್ವಾಮಿ, ಆರೆಸ್ಸೆಸ್ಗ್ಯಾಂಗ್‌, ರಾಮ್ದೇವ್ಬಾಬಾ, ಸುರೇಶ್ಕುಮಾರ್ಎಂಬ ಮಾಜಿ ಬಿಜೆಪಿ ಸಚಿವರು, ಅದೇ ಪಕ್ಷದ ಅನ್ಯ ಧುರೀಣರೂ ಬೊಬ್ಬೆ ಹೊಡೆಯುತ್ತಿರುವುದು ಮಾತ್ರ ಹಾಸ್ಯಾಸ್ಪದವಾಗಿದೆ. 24 ಗಂಟೆಗಳ ತಮ್ಮ ಕಾರ್ಯಕ್ರಮಗಳಲ್ಲಿ 3-4 ಗಂಟೆಯನ್ನು ಜ್ಯೋತಿಷ್ಯ, ವಾಸ್ತು ಎಂದು ಕಾರ್ಯಕ್ರಮ ಬಿತ್ತರಿಸುವ, ಶನಿವಾರಶಿವದೇಗುಲಕ್ಕೆ ಯಾಕೆ ಹೋಗಬಾರದು, ಸೋಮವಾರ ಹೆಂಗಸರು ಮನೆ ಹೊರಗೆ ಹೋದರೆ ಏನಾಗುತ್ತದೆ ಎಂದೆಲ್ಲ ಜ್ಯೋತಿಷಿಗಳನ್ನು ಕರೆದು ಚರ್ಚೆ ನಡೆಸುವ ಕನ್ನುಡದ ಚಾನಲ್ಗಳು ಬೆನ್ನಿ ಹಿನ್ವಿರುದ್ಧ ಜನಾಭಿಪ್ರಾಯ ರೂಪಿಸುವ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಇನ್ನೂ ತಮಾಷೆ ಅನಿಸುತ್ತಿದೆ. ಬೆನ್ನಿ ಹಿನ್ಇಲ್ಲಿಗೆ ಮತಾಂತರ ಮಾಡಲು ಬರುತ್ತಿದ್ದಾನೆ ಎಂದು ಬಿಜೆಪಿ ಮಂದಿ ಹೆದರಿಸುತ್ತಿದ್ದಾರೆ. ಇದಂತೂ ಅಪ್ಪಟ ಸುಳ್ಳು. ಬೆನ್ನಿ ಹಿನ್ಇಲ್ಲಿನ ಜನರನ್ನು ದೇವರು, ಪ್ರಾರ್ಥನೆ, ಸ್ಪರ್ಶ ಎಂದೆಲ್ಲ ವಂಚಿಸಿ ದುಡ್ಡು ಮಾಡಲಿಕ್ಕಾಗಿ ಬರುತ್ತಿದ್ದಾನೆ. ಆತ ಮತಾಂತರ ಮಾಡಿದ ಕುರಿತು ಯಾವ ದಾಖಲೆಗಳೂ ಇಲ್ಲ. ಬೆನ್ನಿ ಹಿನ್ಇಲ್ಲಿಗೆ ಬರುತ್ತಾನೆಂದ ಕೂಡಲೇ ಇಲ್ಲಿನ ಕ್ರೈಸ್ತ ಸಮುದಾಯವನ್ನೇ ಅನುಮಾನದಿಂದ ನೋಡುವುದು, ಅವರೆಲ್ಲ ಬೆನ್ನಿ ಹಿನ್ಭಕ್ತರೆಂದು ಪ್ರಚಾರ ಮಾಡುವುದು ಮತ್ತು ನೆವ ಹಿಡಿದುಕೊಂಡು ಇಲ್ಲಿನ ಕ್ರೈಸ್ತರ ಮೇಲೆ ದಾಳಿ ನಡೆಸುವುದು ಸಲ್ಲದು. ಬಿಜೆಪಿಗಳು ಇದಕ್ಕೆಲ್ಲ ತಯಾರಾಗಿ ನಿಂತಿರಬಹುದು. ಸರಕಾರ ಎಚ್ಚೆತ್ತುಕೊಳ್ಳಬೇಕು. ಎಲ್ಲ ಧರ್ಮಗಳಲ್ಲಿಯೂ ಮುಗ್ದರು, ಮೂರ್ಖರು ಇದ್ದೇ ಇರುತ್ತಾರೆ. ಅಂತಹವರು ಬೆನ್ನಿ ಹಿನ್ಸಭೆಗಳಿಗೆ ಹೋಗಬಹುದು. ಬೆನ್ನಿ ಹಿನ್ಸಭೆಗಳಿಗೆ ಹಿಂದೂಗಳು ಸಹ ಕಳೆದ ಬಾರಿ ಬಂದಾಗ ಹೋಗಿದ್ದರು.ಅದರಲ್ಲೇನು ಮಹಾ ವಿಶೇಷವಿಲ್ಲ. ನಮ್ಮ ಸ್ವಾಮೀಜಿಗಳು-ಕಾವಿಧಾರಿಗಳು-ಬಾಬಾಗಳು ಮಾಡುವ ಢೋಂಗಿ ಏನು ಕಡಿಮೆ ಇದೆಯೆ? ಭಾರತದ ತಥಾಕತಿಥ ದೇವಮಾನವರೆಲ್ಲ ಅರಬ್ದೇಶಗಳಿಗೆ, ಅಮೇರಿಕಕ್ಕೆ, ಜಪಾನಿಗೆ ಎಲ್ಲ ಹೋಗುವುದಿಲ್ಲವೆ? ಅಲ್ಲಿನ ಜನರು ಭಾರತದ ಬಾಬಾಗಳ ವಿರುದ್ಧ ಪ್ರತಿಭಟಿಸಿದ್ದಾರೆಯೆ? ಮೌಢ್ಯ ವಿರೋಧಿ ವಿಧೇಯಕದ ಪ್ರಸ್ತಾವವನ್ನೇ ವಿರೋಧಿಸುವ ಆರೆಸ್ಸೆಸ್ಗ್ಯಾಂಗ್ಗೆ ಬೆನ್ನಿ ಹಿನ್ಮೌಢ್ಯ ಬಿತ್ತುತ್ತಾರೆ ಎಂದು ಹೇಳುವ ನೈತಿಕತೆಯಾದರೂ ಎಲ್ಲಿಂದ ಬರಬೇಕು?

ಬೆನ್ನಿ ಹಿನ್ಅನ್ನು ವಿರೋಧಿಸಬೇಕು. ಆದರೆ ಅದು ವೈಚಾರಿಕ ನೆಲೆಯಲ್ಲಿ ಮಾತ್ರ. ಆತ ಬಂದು ಭಾರತವೇ ಹಾಳಾಗುತ್ತದೆ ಎಂದು ಬಾಯಿ ಬಡಿದುಕೊಳ್ಳುವ ಅಗತ್ಯವಿಲ್ಲ. ಬೆನ್ನಿ ಹಿನ್ಸೇರಿದಂತೆ ಬೆಂಗಳೂರಿನಲ್ಲಿ ನಡೆಯುವ ಎಲ್ಲ ಮೌಢ್ಯ ಬಿತ್ತುವ ಧಾರ್ಮಿಕ-ರಾಜಕೀಯ ನಾಯಕರ ಸಭೆಗಳನ್ನು ನಿಷೇಧಿಸುವ ಸಾಧ್ಯತೆಯನ್ನು ಸರಕಾರ ಯೋಚಿಸಬೇಕಾಗಿದೆ. ಬೆನ್ನಿ ಹಿನ್ಅನ್ನು ಇಷ್ಟೆಲ್ಲ ವಿರೋಧಿಸುತ್ತಲೇ ಒಂದು ಮಾತು ಹೇಳಲೇಬೇಕು. ಬೆನ್ನಿ ಹಿನ್ಬರುತ್ತಾನೆ. ಜನರಿಗೆ ಮಂಕು ಬೂದಿ ಎರಚಿ ತನ್ನು ಕೆಲಸ ಮುಗಿಸಿ ದುಡ್ಡಿನ ಚೀಲದೊಂದಿಗೆ ವಾಪಸಾಗುತ್ತಾನೆ. ಅಲ್ಲಿ ಬೆನ್ನಿ ಹಿನ್ಹಿಂದೂ ಧರ್ಮದ ವಿರುದ್ಧಮೋ, ಇಸ್ಲಾಂ ಇರುದ್ಧಮೋ ಮಾತನಾಡಲಾರ.  ಅಲ್ಲಿ ಹೋದ ಜನಗಳಿಗೆ ಬೆನ್ನಿ ಹಿನ್ಸ್ಪರ್ಶದಿಂದ ಸಮಾಧಾನವಾಗಬಹುದು ಅಥವಾ ಸ್ಪರ್ಶ ಸಿಗದೆ ಅಸಮಾಧಾನವೂ ಆಗಬಹುದು. ಆದರೆ ಅವರೆಲ್ಲ ಶಾಂತಿಯಿಂದ ಮನೆಗಳಿಗೆ ಮರಳುತ್ತಾರೆ. ಕಲ್ಲಡ್ಕ ಪ್ರಭಾಕರ ಭಟ್ಟರ ಹಾಗೆ, ಪೇಜಾವರ ಸ್ವಾಮಿಯ ಹಾಗೆ, ಮುತಾಲಿಕ್-ತೊಗಾಡಿಯನ ಹಾಗೆ ಬೆನ್ನಿ ಹಿನ್ಜನರನ್ನು ಕೆರಳಿಸುವ ಮಾತನಾಡುವುದಿಲ್ಲ ಮತ್ತು ಹಿಂದೂತ್ವವಾದಿಗಳ ಪ್ರಚೋದನೆಯ ಮಾತು ಕೇಳಿ ಮನೆಗೆ ಮರಳುವ ಬಜರಂಗಿಗಳು ಮುಸ್ಲಿಮರ ಕ್ರೈಸ್ತರ ಮನೆಗಳಿಗೆ ಬೆಂಕಿ ಹಚ್ಚಿದ ಹಾಗೆ ಬೆನ್ನಿ ಹಿನ್ಭಕ್ತರು ಅನ್ಯರ ಬದುಕನ್ನು ಹಾಳು ಮಾಡುವುದಿಲ್ಲ. ಬೆನ್ನಿ ಹಿನ್ಭಾರತಕ್ಕೆ ಬರುವುದನ್ನು ನಿಷೇಧಿಸೋಣ. ಅದಕ್ಕೂ ಮೊದಲು ನಿಷೇಧಿಸಬೇಕಾದವರು, ಬಂಧಿಸಬೇಕಾದವರು, ಜೈಲಿಗೆ ಹೋಗಬೇಕಾದವರು ಎಷ್ಟು ಜನ ನಮ್ಮ ನಡುವೆಯೆ ಇದ್ದಾರಲ್ಲ. ಅವರ ಬಗ್ಗೆಯೂ ಮಾತನಾಡಬೇಕಲ್ಲವೆ? ಬೆನ್ನಿ ಹಿನ್ಬಗೆ ಮಾತನಾಡುವ ಮೊದಲು ನಮ್ಮ ಬೆನ್ಹಿಂದೆ ಒಮ್ಮೆ ನೋಡಿಕೊಳ್ಳಬೇಕಲ್ಲವೆ?
-ಶಶಿಧರ ಹೆಮ್ಮಾಡಿ

(ಗೌರಿ ಲಂಕೇಶ್ ಪತ್ರಿಕೆಯಿ ಜನವರಿ 22, 2014ರ ಸಂಚಿಕೆಯಲ್ಲಿ ಪ್ರಕಟವಾದ ಲೇಖನ)